ಪುರೋಹಿತ ವರ್ಗದೊಂದಿಗೆ ಸಮಾಲೋಚನೆ

ದಿನಾಂಕ 07.02.2017 ರಂದು ಬಂಟ್ವಾಳದ ನಿತ್ಯಾನಂದ ಭಜನಾ ಮಂದಿರದಲ್ಲಿ ಸ್ವ-ಸಮಾಜದ ಪುರೋಹಿತ ವರ್ಗದೊಂದಿಗೆ ಪ್ರತಿಷ್ಠಾನದ ಮೂಲಕ ಹಮ್ಮಿಕೊಳ್ಳಬಹುದಾದ ಧಾರ್ಮಿಕ ಕಾರ್ಯಕ್ರಮ ವಿಚಾರವಾಗಿ ಸಭೆ ನಡೆಸಲಾಯಿತು.

ದಿನಾಂಕ 07.02.2016 ರಂದು ಸಮಾಜದ ಪುರೋಹಿತ ವರ್ಗದವರೊಂದಿಗೆ ಮತ್ತು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ)ದ ಪದಾಧಿಕಾರಿಯರೊಂದಿಗೆ ಸಾಮೂಹಿಕ ಬ್ರಹ್ಮೋಪದೇಶ ಮತ್ತು ಪೊಡಂಬೋಡಿ ಗೃಹಪ್ರವೇಶ’ ನಡೆಸುವ ಬಗ್ಗೆ ಪೂರ್ವ ತಯಾರಿ ಸಭೆ ನಡೆಯಿತು.

ದಿನಾಂಕ 22.07.2014 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ನಮ್ಮ ಸಮಾಜದ ಪುರೋಹಿತರೊಂದಿಗೆ ಸಭೆ ಕರೆದು ಸಾಮೂಹಿಕ ಯಜ್ಞೋಪವೀತ ಕಾರ್ಯಕ್ರಮ ಮತ್ತು ‘ಪ್ರತಿಷ್ಠಾನದ ಕಾರ್ಯಕ್ರಮಗಳಲ್ಲಿ ಪುರೋಹಿತ ವರ್ಗದ ಪಾತ್ರ’ ಬಗ್ಗೆ ಚರ್ಚಿಸಲಾಯಿತು.