ಆಶೀರ್ವಚನ ಕಾರ್ಯಕ್ರಮ

ದಿನಾಂಕ 20.05.2017 ರ ಶನಿವಾರ ಜ್ಯೇಷ್ಠ ಮಾಸದ, ಶುಕ್ಲ ಪಕ್ಷ, ಷಷ್ಠಿ ಬುಧವಾರ 31.05.2017 ರ ಪರ್ಯಂತ ಶ್ರೀ ಮಠ್ ಸಂಸ್ಥಾನ್ ದಾಬೋಳಿ ಮಠದ ಸಂಜೀವಿನಿ ಸಮಾಧಿಸ್ಥ ಮಠಾಧೀಶ ಪರಮ ಪೂಜ್ಯ ಶ್ರೀಮದ್ ಪೂರ್ಣಾನಂದ ಸ್ವಾಮಿ ಮಹಾರಾಜ್, ಅವರ ಕೃಪಾಶೀರ್ವಾದ ಮತ್ತು ಪವಿತ್ರ ಪಾದುಕೆಗಳೊಂದಿಗೆ ವಿದ್ಯಮಾನ ಮಠಾಧೀಶ ಪರಮಪೂಜ್ಯ ಶ್ರೀಮದ್ ಪ್ರದ್ಯುಮ್ನಾನಂದ ಸ್ವಾಮಿ ಮಹಾರಾಜರ ಸದಿಚ್ಛೆ ಮತ್ತು ಆಶೀರ್ವಾದಗಳೊಂದಿಗೆ ಶ್ರೀ ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರ ದ.ಕ.ಜಿಲ್ಲಾ ಆಶೀರ್ವಚನ ಕಾರ್ಯಕ್ರಮವನ್ನು ಸಮಾಜದ ವಿವಿಧ ಸಂಘ ಸಂಸ್ಥೆಗಳು ಮತ್ತು ಪುರೋಹಿತ ವರ್ಗದ ಸಹಯೋಗದಲ್ಲಿ ಸುಮಾರು 10 ಕಡೆಗಳಲ್ಲಿ ಯಶಸ್ವಿಯಾಗಿ ನೆರವೇರಿತು.