ವಲಯ ಸಮೀತಿ

ದಿನಾಂಕ 02.05.2016 ರಂದು ಇರುವೈಲಿನಲ್ಲಿ, ದಿನಾಂಕ 10.07.2016ರಂದು ವಗ್ಗ ವಲಯ ಮತ್ತು ಸಿದ್ಧಕಟ್ಟೆ ವಲಯದಲ್ಲಿ, ದಿನಾಂಕ 17.07.2016ರಂದು ಪುತ್ತೂರು ವಲಯದಲ್ಲಿ, ದಿನಾಂಕ 24.07.2016ರಂದು ಬೆಳ್ತಂಗಡಿ ವಲಯ ಮತ್ತು 31.06.2016ರಂದು ಕಲ್ಲಡ್ಕ ವಲಯದಲ್ಲಿ ಹೀಗೆ 6 ಕಡೆಗಳಲ್ಲಿ ಪ್ರತಿಷ್ಠಾನದ ಉಪಸಮಿತಿಗಳನ್ನು ರಚಿಸಲಾಯಿತು.

ದಿನಾಂಕ 10.07.2016ರಂದು ವಗ್ಗ ವಲಯದ ಸಮಾಜ ಬಾಂಧವರೊಂದಿಗೆ ‘ವಗ್ಗ ವಲಯ ಸಮಿತಿ’ ರಚಿಸುವ ನಿಟ್ಟಿನಲ್ಲಿ, ವಗ್ಗದ ಶಾರದಾ ಭಜನಾ ಮಂದಿರದಲ್ಲಿ ಸಭೆ ಕರೆದು, ಸಮಿತಿಯನ್ನು ರಚಿಸಲಾಯಿತು. ಅದೇ ದಿನ ಸಾಯಂಕಾಲ, ಸಿದ್ಧಕಟ್ಟೆ, ಕರ್ಪೆ ಮತ್ತು ವಾಮದಪದವು ಸಮಾಜ ಬಾಂಧವರೊಂದಿಗೆ ಚರ್ಚಿಸಿ, ವಾಮದಪದವು-ಸಿದ್ಧಕಟ್ಟೆ ವಲಯ ಸಮಿತಿಯನ್ನು ರಚಿಸಲಾಯಿತು.

ದಿನಾಂಕ 17.07.2016ರಂದು, ಪುತ್ತೂರಿನ ನಟರಾಜ ಮಂದಿರದಲ್ಲಿ ಪುತ್ತೂರು, ಉಪ್ಪಿನಂಗಡಿಯನ್ನು ಸೇರಿಸಿ ‘ ಪುತ್ತೂರು ವಲಯ ‘ ಸಮಿತಿಯನ್ನು ರಚಿಸಲಾಯಿತು.

ದಿನಾಂಕ 24.07.2016ರಂದು ಅಪರಾಹ್ನ, ಪ್ರತಿಷ್ಠಾನದ ಪದಾಧಿಕಾರಿಯಾದ ಶ್ರೀ ಯಶವಂತ ನಾಯಕ್, ಇವರ ಮನೆಯಲ್ಲಿ ‘ಬೆಳ್ತಂಗಡಿ ವಲಯ’ ಸಮಿತಿ ರಚಿಸಲಾಯಿತು.

ದಿನಾಂಕ 31.07.2016ರಂದು, ಕಲ್ಲಡ್ಕ ಮೀನಾಕ್ಷಿ ಮಂದಿರದಲ್ಲಿ, ಇನೋಳಿ, ಬೋಳಂಗಡಿ, ಮತ್ತು ಕಲ್ಲಡ್ಕ ವ್ಯಾಪ್ತಿಯನ್ನು ಸೇರಿಸಿ, ‘ಕಲ್ಲಡ್ಕ ವಲಯ’ ಸಮಿತಿಯನ್ನು ರಚಿಸಲಾಯಿತು.

ದಿನಾಂಕ 24.06.2017ರಂದು ಶ್ರೀ ಸದಾಶಿವ ರಾವ್ ಬೋಲ್ಡೆ, ಇವರ ಮನೆಯಲ್ಲಿ ಪ್ರತಿಷ್ಠಾನದ ವತಿಯಿಂದ ಒಡ್ಡಾರು, ಪದ್ರೆಂಗಿ, ಮಳಲಿ ಹಾಗೂ ಇರುವೈಲು, ಪಂಜ ಸಮುದಾಯವನ್ನು ಸೇರಿಸಿ ‘ ವಲಯ ಸಮೀತಿ’ಯನ್ನು ರಚಿಸಲಾಯಿತು.

  • Vogga Valaya

    ವಗ್ಗ ವಲಯದ ಸಭೆ ” order_by=”sortorder” order_direction=”ASC”...

  • Iruvailu Valaya

       ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಇರುವೈಲು-ಒಡ್ಡೂರು ವಲಯ...